March 3, 2026
0003

ಹಿರಿಯೂರು:

ಗ್ರಾಮದ ಮೂಲಭೂತ ಸೌಕರ್ಯಗಳ  ಅಭಿವೃದ್ದಿಗೆ, ಸುಗಮ ಸಂಚಾರಕ್ಕೆ ರಸ್ತೆ ಕಾಮಗಾರಿ ಮಹತ್ವದ  ಪಾತ್ರ ವಹಿಸಲಿದೆ ಎಂಬುದಾಗಿ ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು

ತಾಲ್ಲೂಕಿನ ಗಾಯಿತ್ರಿಪುರ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ  ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ  ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.  ಅವರು ಹೇಳಿದರು.

ಯಾವುದೇ ರಾಷ್ಟ್ರದ  ಆರ್ಥಿಕ ಅಭಿವೃದ್ಧಿಯಲ್ಲಿ ಉತ್ತಮವಾದ ರಸ್ತೆ  ನಿರ್ಮಾಣ ಹಾಗೂ ರಸ್ತೆಗಳ ಸಂಪರ್ಕವು ಅತಿ ಮುಖ್ಯವಾಗಿರುತ್ತದೆ  ಎಂಬುದಾಗಿ ಅವರು ಹೇಳಿದರು.  ಈ ಸಂದರ್ಭದಲ್ಲಿ  ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *