
ಹಿರಿಯೂರು :
ಇಂದು ಹಿರಿಯೂರು ನಗರಕ್ಕೆ ಮಾನ್ಯ ಗೌರವಾನ್ವಿತ ಪೌರಾಡಳಿತ ಸಚಿವರಾದ ಶ್ರೀಬಾಲಕೃಷ್ಣರವರು ಹಾಗೂ ಕುಣಿಗಲ್ ಶಾಸಕರಾದ ಶ್ರೀರಂಗನಾಥ್ ಅವರು ಭೇಟಿ ನೀಡಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಂದರ್ಭದಲ್ಲಿ ಪೌರಕಾರ್ಮಿಕರು ಗುಲಾಬಿ ಹೂ ನೀಡುವ ಮುಖಾಂತರ ಮಾನ್ಯ ಸಚಿವರಿಗೆ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ಮಾನ್ಯ ಯೋಜನಾ ನಿರ್ದೇಶಕರಾದ ಶ್ರೀಮತಿರೇಷ್ಮಾ, ಕಾರ್ಯಪಾಲಕ ಅಭಿಯಂತರದ ವಿನಯ್, ಪೌರಾಯುಕ್ತರಾದ ವಾಸೀಂ, ಯೋಜನಾ ನಿರ್ದೇಶಕರ ಕಚೇರಿಯ ವ್ಯವಸ್ಥಾಪಕರಾದ ಶ್ರೀಮತಿ ರೇಣುಕಾ, ನಗರಸಭೆಯ ಆರೋಗ್ಯ ನಿರೀಕ್ಷಕರುಗಳು, ದಫೇದರ್ ಗಳು, ಪೌರಕಾರ್ಮಿಕರು ಹಾಗೂ ನಗರಸಭೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
