
ಹಿರಿಯೂರು :
ತಾಲ್ಲೂಕಿನಲ್ಲಿ ಉತ್ತಮ ಮಳೆ,ಬೆಳೆಯಾಗಿ, ರೈತರ ಹಾಗೂ ಸಾರ್ವಜನಿಕರ ನೀರಿನ ಸಮಸ್ಯೆ ಪರಿಹಾರವಾಗುವ ಮೂಲಕ ರೈತರ ಹಾಗೂ ತಾಲ್ಲೂಕಿನ ಜನರ ಬದುಕು ಹಸನಾಗಬೇಕು, ಎಂಬುದಾಗಿ ಮಾಜಿಶಾಸಕರಾದ ಶ್ರೀಮತಿ ಕೆ.ಪೂರ್ಣಿಮಾ ಶ್ರೀನಿವಾಸ್ ಶ್ರೀಭವನಾಸಿರಂಗನಾಥಸ್ವಾಮಿಯಲ್ಲಿ ಪ್ರಾರ್ಥಿಸಿದರು.
ತಾಲೂಕು ಆದಿವಾಲಗೊಲ್ಲರಹಟ್ಟಿಯ ನೂತನ ಶ್ರೀಭವನಾಸಿರಂಗನಾಥಸ್ವಾಮಿ ದೇವಾಲಯ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ, ವಿಶೇಷ ಪೂಜೆ ಸಲ್ಲಿಸಿ, ಶ್ರೀಸ್ವಾಮಿಯ ಆಶೀರ್ವಾದ ಪಡೆದು ಮಾತನಾಡಿದರು.ಈ ಸಂದರ್ಭದಲ್ಲಿ ಶ್ರೀ ಸ್ವಾಮಿಯ ಪೂಜಾರರು, ಮುಖಂಡರು, ಭಕ್ತಾದಿಗಳು ಭಾಗವಹಿಸಿದ್ದರು.
