
ಹಿರಿಯೂರು :
ನಿಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸಕ್ಕೆ ನಾನು ಸದಾ ಋಣಿಯಾಗಿದ್ದೇನೆ, ಧರ್ಮ–ಜಾತಿಗಳನ್ನು ಮೀರಿ ಎಲ್ಲರೂ ಸಹೋದರತ್ವದಿಂದ ಬದುಕುವುದೇ ನಮ್ಮ ನಾಡಿನ ನಿಜವಾದ ಶಕ್ತಿ, ನಮ್ಮ ತಂದೆ ಡಿ.ಸುಧಾಕರ್ ರವರು ಸಹ ಇದೇ ತತ್ವವನ್ನು ಪಾಲಿಸಿಕೊಂಡು ಬಂದಿದ್ದು, ಅವರ ಹಾದಿಯಲ್ಲಿಯೇ ನಾನು ಸಹ ನಡೆಯುತ್ತೇನೆ ಎಂಬುದಾಗಿ ಸುಹಾಸ್ ಸುಧಾಕರ್ ಹೇಳಿದರು.

ನಗರದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ನಡೆದ ದೊಡ್ಡಕೆಂಡ ಉತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರು ಹಾಗೂ ಹಿಂದೂ ಬಾಂಧವರೊಂದಿಗೆ ಸಡಗರ-ಸಂಭ್ರಮದಿಂದ ಭಾಗವಹಿಸಿ, ನಾಡಿನ ಜನತೆಗೆ ಶಾಂತಿ, ಸೌಹಾರ್ದತೆ ಹಾಗೂ ಸಮೃದ್ಧಿ ದೊರಕಲಿ ಎಂದು ಪ್ರಾರ್ಥಿಸಿ, ನಂತರ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
