
ಹಿರಿಯೂರು:
ಯುವಕವಿ ತರುಣ್ ಎಂದು ಅಂತರ್ಯ ಅವರ ಕೃತಿಗೆ ರಾಜ್ಯ ಮಟ್ಟದ ಗೌರವ ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಸಹಾಯಧನಕ್ಕೆ ಹಿರಿಯೂರು ತಾಲ್ಲೂಕಿನ ಟಿ. ನಾಗೇನಹಳ್ಳಿ ಗ್ರಾಮದ ಯುವಕವಿ ತರುಣ್ ಅಂತರ್ಯ ಅವರ ಬಿಗಿ ಹಿಡಿದ ಮುಷ್ಠಿಯಲಿ ಕವನ ಸಂಕಲ ಆಯ್ಕೆಯಾಗಿದೆ.
ಮಾರ್ಚ್ 10ರಂದು ಬೆಂಗಳೂರಿನ ಕನ್ನಡ ಭವನದ, ನಯನ ರಂಗಮಂದಿರದಲ್ಲಿ , ಹೆಸರಾಂತ ಲೇಖರರು ಹಾಗೂ ಚಲನಚಿತ್ರ ನಿರ್ದೇಶಕರಾದ ಡಾ.ನಾಗತಿಹಳ್ಳಿ ಚಂದ್ರಶೇಖರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ.
