
ಹಿರಿಯೂರು :
ಕಿರುತೆರೆಯ ಹೆಸರಾಂತ ನಟಿಯಾಗಿ ವಿವಿಧ ಧಾರವಾಹಿಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ಮನಮೋಹಕ ಅಭಿನಯದ ಮೂಲಕ ಜನರ ಮನೆಮಾತಾದ ಕಿಶೋರಿ ಬಲ್ಲಾಳ್ ರವರು ನಿಧನರಾಗಿದ್ದು, ಕಿರುತೆರೆಯ ನಟಿ ಕಿಶೋರಿ ಬಲ್ಲಾಳ್ ರವರ ನಿಧನಕ್ಕೆ ಹಿರಿಯೂರುನ್ಯೂಸ್ ತಂಡದಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಗಿದೆ.
ಹೆಸರಾಂತ ನಟಿಯಾದ ಕಿಶೋರಿ ಬಲ್ಲಾಳ್ ರವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬವರ್ಗದವರಿಗೆ ಕರುಣಿಸಲಿ ಎಂಬುದಾಗಿ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಹಾಗೂ ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಉಮೇಶ್ ಯಾದವ್, ಪರಮೇಶ್ವರಪ್ಪ, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ, ಇವರುಗಳು ಸಂತಾಪ ಸೂಚಿಸಿದ್ದಾರೆ.
