
ಹಿರಿಯೂರು :
ನಗರದ ಬಸವರಾಜ್ ಆಸ್ಪತ್ರೆ ಪಕ್ಕದಲ್ಲಿರುವ ಮಹಿಳಾ ಕಾಂಗ್ರೆಸ್ ಮುಖಂಡರಾದ ಶ್ರೀಮತಿ ರಜಿಯಾ ಸುಲ್ತಾನ ಅವರ ಪತಿ ಖಲೀಕ್ ರವರು ನಿಧನರಾದ ಹಿನ್ನೆಲೆಯಲ್ಲಿ, ಅವರ ನಿವಾಸಕ್ಕೆ ಸಚಿವ ಡಿ.ಸುಧಾಕರ್ ರವರ ಪುತ್ರ ಸುಹಾಸ್ ಸುಧಾಕರ್ ರವರು ಭೇಟಿ ನೀಡಿ, ದುಃಖತಪ್ತರಾದ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಶ್ರೀಮತಿ ರಜಿಯಾ ಸುಲ್ತಾನ ಅವರ ಪತಿ ಶ್ರೀ ಖಲೀಕ್ ಅವರು ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾದ ಸುದ್ದಿ ತಿಳಿದು ಸುದ್ದಿ ತಿಳಿದು, ಅವರ ಮನೆಗೆ ಭೇಟಿ ನೀಡಿದ ಸುಹಾಸ್ ರವರು ಅಲ್ಲಾಹ್ ಅವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬಸ್ಥರಿಗೆ ಈ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರಲ್ಲದೆ, ನೀವು ನಮ್ಮ ತಂದೆಯವರಾದ ಡಿ.ಸುಧಾಕರ್ ರವರ ಬೆಂಬಲಿಗರಾಗಿದ್ದು, ನಾವು ಸಹ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ ಎಂಬ ಭರವಸೆ ನೀಡಿದರು.
