
ಹಿರಿಯೂರು :
ಗ್ರಾಮೀಣ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಗಣಪತಿ ದೇವಾಲಯದ ಬಳಿ ಗುರುಪೂರ್ಣಿಮೆಯ ಅಂಗವಾಗಿ ಔದುಂಬರ ವೃಕ್ಷದ ಅಡಿಯಲ್ಲಿ ಗುರುದತ್ತಾತ್ರೇಯ, ಗುರುಸಾಯಿಬಾಬಾ ಹಾಗೂ ಗುರು ರಾಘವೇಂದ್ರಸ್ವಾಮಿಯವರಿಗೆ ವಿಶೇಷಪೂಜೆಯನ್ನು ಸಲ್ಲಿಸಲಾಯಿತು.
ಶ್ರೀತೇರುಮಲ್ಲೇಶ್ವರಸ್ವಾಮಿ ದೇವಸ್ಥಾನದ ಅರ್ಚಕರಾದ ವಿಶ್ವನಾಥ್ ಆಚಾರ್ಯ ಮತ್ತು ವೀರಣ್ಣನವರು ಪೂಜಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದರು. ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಇದೇ ಸಂದರ್ಭದಲ್ಲಿ ಬಡಜನರಿಗೆ ಹೊದಿಕೆಗಳನ್ನು ವಿತರಿಸಲಾಯಿತು.
