
ಹಿರಿಯೂರು:
ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ನಿರ್ಮಿಸುವ ಉದ್ದೇಶದಿಂದ ನಗರದ ರಸ್ತೆ ಅಭಿವೃದ್ಧಿಯ ಜೊತೆಗೆ 6ನೇ ವಾರ್ಡಿನಿಂದ 20ನೇ ವಾರ್ಡಿನವರೆಗೂ ಸಿ.ಸಿ.ರಸ್ತೆ ಚರಂಡಿಗಳ ನಿರ್ಮಾಣ ಮಾಡುತ್ತಿದೆ ಎಂಬುದಾಗಿ ಭೂಮಿಪೂಜೆಯನ್ನು ನೆರವೇರಿಸಲಾಗುತ್ತಿದೆ ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ನಗರದ 6ನೇ ವಾರ್ಡಿನಿಂದ 20ನೇ ವಾರ್ಡಿನವರೆಗೂ ಸಿ.ಸಿ.ರಸ್ತೆ ಚರಂಡಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿ, ನಂತರ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಬಾಲಕೃಷ್ಣ, ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ, ಸ್ಥಳೀಯ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಂ.ಡಿ.ಸಣ್ಣಪ್ಪ, ವಿಠ್ಠಲ್ ಪಾಂಡುರಂಗ, ಶ್ರೀಮತಿ ಮಮತಾ, ಶ್ರೀಮತಿ ರತ್ನಮ್ಮ, ಹಾಗೂ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ಜೆ.ರಮೇಶ್, ನಗರಸಭೆ ಸದಸ್ಯರುಗಳಾದ ಈರಲಿಂಗೇಗೌಡ, ಮಾಜಿ ನಗರಸಭಾ ಅಧ್ಯಕ್ಷ ಚಂದ್ರಶೇಖರ್, ಅಣ್ಣಪ್ಪ, ಶಿವಣ್ಣ, ಕಬ್ಬಡಿರವಿ, ಜ್ಞಾನೇಶ್, ಸಾದಾತ್, ಅಜೀಜ್, ಸುಜಾತಾ, ರಜಿಯಾಸುಲ್ತಾನ, ಅನಿಲ್ ಕುಮಾರ್, ವಿಶಾಲಾಕ್ಷಮ್ಮ, ಮಾಜಿನಗರ ಸಭಾಧ್ಯಕ್ಷರಾದ ಈ.ಮಂಜುನಾಥ್, ಜಗದೀಶ್, ಗೀತಾಗಂಗಾಧರ್, ಶಮಿವುಲ್ಲಾ, ಶಿವು, ದರ್ಶನ್, ಗುರು, ಫಾರೂಕ್, ಜಬಿದಾದು, ಸಲ್ಮಾನ್, ಅಭಿಬ್, ಚೋಟು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
