
ಹಿರಿಯೂರು:
ಚೆನ್ನೈನ ಸತ್ಯಭಾಮ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರ ಮಟ್ಟದ ಜಾನಪದ ಕಲಾಮೇಳದ ಡೊಳ್ಳುಕುಣಿತ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ತಂಡ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದೆ.
ಈ ತಂಡದಲ್ಲಿ ಹಿರಿಯೂರಿನ ತ್ರಿಶಾ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಕಾಲೇಜು ತಂಡ ಡೊಳ್ಳು ಕುಣಿತದ ನೃತ್ಯ ಸ್ಪರ್ಧೆಯಲ್ಲಿ ಅಂತರ ವಿಶ್ವವಿದ್ಯಾಲಯ, ರಾಜ್ಯ ಮಟ್ಟ, ರಾಷ್ಟ್ರ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿ ಅಂತರಾಷ್ಟ್ರೀಯ ಸ್ಪರ್ಧೆಗೆ ಗೆ ಆಯ್ಕೆಯಾಗಿದೆ.
ಈ ತಂಡದಲ್ಲಿರುವ ತ್ರಿಶಾ ಗುಜ್ಜಾರ್ ಅವರನ್ನು ಐಸಿರಿ ಕಲಾ ವೃಂದದ ಅಧ್ಯಕ್ಷ ಶಿವಶಂಕರ ಮಠದ್, ಡಿ.ಎಂ.ಸಿದ್ದಗಂಗಾ, ಸಿರೀಶ್ ಆರ್.ಎಸ್.ಮಠದ್, ಭರತನಾಟ್ಯ ಕಲಾವಿದೆ ಶ್ರೀಗೌರಿ ಆರ್.ಎಸ್. ಮಠದ್, ಕಲಾಸಂಪದ ನಾಟ್ಯ ಶಾಲೆಯ ಗೀತಾ ಭಟ್, ನಾಗಶ್ರೀ ಭಟ್, ಪರಮೇಶ್ವರ ಭಟ್ ಅಭಿನಂದಿಸಿದ್ದಾರೆ.
