March 2, 2026
00001

ಹಿರಿಯೂರು:

ನಗರದ ಶ್ರೀ ಪವದಿಯಮ್ಮ ದೇವರ ಜಾತ್ರಾ ಮಹೋತ್ಸವವು ಹಲವಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಭಕ್ತಿಭಾವದಿಂದ  ವಿಜೃಂಭಣೆಯಿಂದ ನೆರವೇರಿತು.ಶ್ರೀ ಪವದಿಯಮ್ಮ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ  ದೇವಾಲಯದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಸಂಜೆ ನಗರದ ಸುಮಂಗಲೆಯರಿಂದ ಶ್ರೀಪವದಿಯಮ್ಮ ದೇವರಿಗೆ  ಅಕ್ಕಿ ತಂಬಿಟ್ಟಿನ ಆರತಿ ಭಕ್ತಿ ಭಾವದಿಂದ ನಡೆಯಿತು. ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ನೂರಾರು ಜನ ಭಕ್ತರು  ದೇವಾಲಯಕ್ಕೆ ಭೇಟಿ ನೀಡಿ  ದೇವರ ದರ್ಶನ ಭಾಗ್ಯವನ್ನು ಪಡೆದರು. ಭಕ್ತಾದಿಗಳಿಗೆ  ತೀರ್ಥ ಪ್ರಸಾದ ವಿನಿಯೋಗ  ನಡೆಯಿತು.

ದೇವಸ್ಥಾನ ಹಾಗೂ ಸುತ್ತಮುತ್ತಲಿನ ಆವರಣವನ್ನು ಝಘಮಗಿಸುವ  ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಕಣ್ಮನ ಸೆಳೆಯುವಂತಿತ್ತು. ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಆರ್ಮುಗಂ ಹಾಗೂ ಪುರಸಭೆ ಮಾಜಿ ಅಧ್ಯಕ್ಷರಾದ ಎ.ಮಂಜುನಾಥ್ ಸೇರಿದಂತೆ  ಅನೇಕ ಯುವ ಮುಖಂಡರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *