
ಹಿರಿಯೂರು :
ನಗರದ ವಾರ್ಡ್ ನಂ. 20ರ ಆರ್ಯವೈಶ್ಯ ಸಂಘದ ಗೌರವ ಅಧ್ಯಕ್ಷರು ಹಾಗೂ ಹಿರಿಯರಾದ ಶ್ರೀ ಆನಂದ್ ಶೆಟ್ಟಿ ಶಾಲು ಹೊದಿಸಿ, ಪುಷ್ಪಮಾಲೆ ಹಾಕಿ ಸನ್ಮಾನಿಸಿ, ಗೌರವಿಸಿ, ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಗೊಲ್ಲರ ಸಂಘದ ಅಧ್ಯಕ್ಷ ಹಾಗೂ ಹಿರಿಯೂರು ವಿಧಾನಸಭಾ ಕ್ಷೇತ್ರದ ಎನ್.ಡಿ.ಎ ಟಿಕೆಟ್ ಆಕಾಂಕ್ಷಿ ಶ್ರೀರಾಜಣ್ಣ, ಬಿಜೆಪಿ ಮುಖಂಡ ದ್ಯಾಮಣ್ಣ, ಬಿಜೆಪಿ ಯುವಮುಖಂಡ ಕೇಶವಮೂರ್ತಿ, ಶ್ರೀಕನ್ನಿಕಾಪರಮೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್.ತಿಪ್ಪೇಸ್ವಾಮಿ, ಪಿ.ಆರ್.ಸತೀಶ್ ಬಾಬು, ಆನಂದಶೆಟ್ಟಿರವರ ಮಕ್ಕಳಾದ ಬಾಲಾಜಿ ಹಾಗೂ ಲಕ್ಷ್ಮೀಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
