
ಹಿರಿಯೂರು :
ನಗರದ ಮಾಹಿ ಜೂವೇಲರ್ಸ್ ಮಾಲೀಕರು ಮತ್ತು ಮಾಹಿಫಾರಂ ಹೌಸ್ ಮಾಲೀಕರು ಹಾಗೂ ಶ್ರೀ ಶುಭೋದಯ ಶೈಕ್ಷಣಿಕ ಸೇವಾ ವೃದ್ದಾಶ್ರಮದ ಹಿತೈಷಿಗಳೂ, ದಾನಿಗಳು, ಮಾರ್ಗದರ್ಶಕರು ಆದ ಶ್ರೀಕೌಶಿಕ್ ನಾಯ್ಡು ರವರ ಧರ್ಮಪತ್ನಿ ಶ್ರೀಮತಿ ಬಾನುಮತಿಯವರ ಹುಟ್ಟುಹಬ್ಬದ ಪ್ರಯುಕ್ತ ಆಶ್ರಮದ ಎಲ್ಲಾ ಹಿರಿಯರಿಗೆ ರಾತ್ರಿಯ ಊಟದ ವ್ಯವಸ್ಥೆ ಮಾಡಲಾಗಿತ್ತು.

ಕುಟುಂಬ ಸಮೇತರಾಗಿ ಶ್ರೀ ಆಶ್ರಮಕ್ಕೆ ಭೇಟಿ ನೀಡಿ ಸಾಯಿಬಾಬರವರಿಗೆ ಪೂಜೆ ಸಲ್ಲಿಸಿ ಹಿರಿಯರ ಆಶೀರ್ವಾದ ಪಡೆದು ಕೇಕ್ ಕತ್ತರಿಸುವ ಮುಖಾಂತರ ಸರಳ ಹುಟ್ಟುಹಬ್ಬವನ್ನು ಆಚರಿಸಿ ಕೊಂಡ ಶ್ರೀಮತಿ ಬಾನುಮತಿಯವರು ಆಶ್ರಮದ ವೃದ್ಧರಿಗೆ ಹಣ್ಣುಗಳನ್ನು ವಿತರಣೆ ಮಾಡಿದರು ಹಾಗೂ ಬೇಸಿಗೆ ಬಿಸಿಲು ಜಾಸ್ತಿ ಇರುವ ಕಾರಣ 45 ಲೀಟರ್ ಕೂಲರ್ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಆಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿಯವರು ಶ್ರೀಕೌಶಿಕ್ ನಾಯ್ಡು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಬಾನುಮತಿಯವರ ಸೇವಾಮನೋಭಾವಕ್ಕೆ ಶ್ರೀ ಆಶ್ರಮ ಸಮಿತಿ ವತಿಯಿಂದ ಅವರಿಗೆ ಹಾಗೂ ಅವರ ಕುಟುಂಬವರ್ಗಕ್ಕೆ ದೈವಾನುಗ್ರಹ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಿ, ಆಶ್ರಮದ ನಿವಾಸಿಗಳ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
