
ಹಿರಿಯೂರು:
ಎಂ.ಎಲ್.ಎ. ಮಾರ್ಷಲ್ ಆರ್ಟ್ ಮತ್ತು ಪಿಟ್ನಸ್ ಅಕಾಡೆಮಿ ವತಿಯಿಂದ ಗಣರಾಜ್ಯೋತ್ಸವ ಕಪ್ ನ್ನು ಬೆಂಗಳೂರಿನ ಯಲಹಂಕದ ಶೇಷಾದ್ರಿಪುರಂ ಕಾಲೇಜ್ ನಲ್ಲಿ ನಡೆದ ರಾಜ್ಯ ಮಟ್ಟದ 7ನೇ ವರ್ಷ ವಯೋಮಿತಿಯ ಕರಾಟೆ ಪಂದ್ಯಾವಳಿಯಲ್ಲಿ ಹಿರಿಯೂರಿನ ಫೈಟರ್ ಮಾರ್ಷಲ್ ಅಕಾಡೆಮಿ ಸೆಕೆಂಡ್ ಸ್ಟ್ಯಾಂಡರ್ಡ್ ವಿದ್ಯಾರ್ಥಿ ಧನುಷ್ ಮೋದಿ ತಂದೆ ಎಸ್. ಚೇತನ್ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.

ವಿದ್ಯಾರ್ಥಿ ಧನುಷ್ ಮೋದಿ ಸಾಧನೆಗೆ ತರಬೇತಿದಾರರಾದ ಎನ್.ಪ್ರಭು, ಜೆ.ಪುಷ್ಪ ಮತ್ತು ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಮಾಯಸಂದ್ರ ರಂಗಪ್ಪಯಾದವ್ ಅಭಿನಂದಿಸಿದ್ದಾರೆ. ಮತ್ತು ವಿದ್ಯಾರ್ಥಿಯ ಈ ಸಾಧನೆಗೆ ಸಹಕರಿಸಿದ ಪೋಷಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
