March 2, 2026
0000005

ಹಿರಿಯೂರು:

ಇಂದಿನ ಆಧುನಿಕ ಜಗತ್ತಿನಲ್ಲಿ ಆರೋಗ್ಯವೇ ಮಹಾಭಾಗ್ಯವಾಗಿದ್ದು, ರಕ್ತಹೀನತೆಯಿಂದ ಬಳಲುವವರಿಗೆ ಆರೋಗ್ಯಕರ ಆಹಾರವಾಗಿ ನುಗ್ಗೆಸೊಪ್ಪು, ಕಾಳು, ಬೇಳೆ, ಹೆಚ್ಚುಹೆಚ್ಚು ಸತ್ವಯುತ ಆಹಾರ ನೀಡಬೇಕು, ಪೌಷ್ಠಿಕಾಂಶತೆಯುಳ್ಳ ಆಹಾರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ ಎಂಬುದಾಗಿ ಸತ್ವ ಮಹಿಳಾ ಸಂಸ್ಥೆ ಅಧ್ಯಕ್ಷರಾದ ಶಶಿಕಲಾ ರವಿಶಂಕರ್ ಹೇಳಿದರು.

ನಗರದ ಮಾರಿಕಾಂಬಾ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಹಿಮೋಗ್ಲೋಬಿನ್ ಶತಾಂಶವನ್ನು ಪರಿಶೀಲಿಸಿ, ಆರೋಗ್ಯ ರಕ್ಷಣೆಯ ಕುರಿತು ವೃದ್ಧರಲ್ಲಿ ಜಾಗೃತಿ ಮೂಡಿಸಿ, ನಂತರ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸಂಶೋಧನಾ ತಂತ್ರಜ್ಞರಾದ ನಿರ್ಮಲಾ ಮಹಂತೇಶ್ ತಪಾಸಣೆ ನಡೆಸಿದರು. ಸತ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸರ್ವಮಂಗಳಾ ರಮೇಶ್, ನಿರ್ದೇಶಕರಾದ ಲತಾ, ಯಮುನಾ ಉಮಾಕಾಂತ್, ಶ್ರೀಕರ, ನಾಗರತ್ನ, ತ್ರಿವೇಣಿ ಶಶಿಧರ್, ರಾಜೇಶ್ವರಿ, ವೃದ್ಧಾಶ್ರಮದ ವ್ಯವಸ್ಥಾಪಕರಾದ ಕೃಷ್ಣಪ್ಪ,  ಗುರುಮೂರ್ತಿ  ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *