
ಹಿರಿಯೂರು :
ನಗರದ ಕೆ.ಎಂ.ಕೊಟ್ಟಿಗೆ ಡಿಸಿ ಕಾಲೋನಿ ಸೈದಾನ ಅಬೂಬಕ್ಕರ್ ಸಿದ್ದೀಕ್ ಮಸೀದಿಯಲ್ಲಿ ಸತತವಾಗಿ ಎರಡು ವಾರಗಳಿಂದ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಯೋಜನೆ ಮತ್ತು ಸಾಂಖ್ಯಿಕ ಖಾತೆಯ ಸಚಿವರಾದ ಡಿ.ಸುಧಾಕರ್ ರವರು ಶೀಘ್ರ ಗುಣಮುಖರಾಗಲಿ ಎಂಬುದಾಗಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಸೀದಿಯ ಗುರುಗಳಾದ ಮೌಲಾನಾ ಸಾದತ್, ಅಧ್ಯಕ್ಷರಾದ ಪಿ.ಸಮೀವುಲ್ಲಾ, ಕಾರ್ಯದರ್ಶಿ ರಾಜಬಾಬು ಬಾಬುಸಾಬ್, ಅನೀಫ್ ಬುರ್ಹಾನ್, ಅನೀಪ್ ಸಾಬ್ ದಾದಾಪೀರ್, ಅಸೇನ್ ಖಾನ್, ಹಸನ್ ರಹಮತ್ ಉಲ್ಲಾ, ಅಜೀಜ,ಮೌಸನ ಸಾಬ್, ಮುಜಿಬ್, ಸಾದತ್, ಚೋಟು ಮಹಮದ್ ಶಕೀಲ್ , ಸುಹೇಲ್, ಹಾಗೂ ಅನೇಕ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.
