
ಹಿರಿಯೂರು :
ತಾಲ್ಲೂಕಿನ ಜವಗೊಂಡನಹಳ್ಳಿ ಹೋಬಳಿಯ ಗೌನಹಳ್ಳಿ ಗ್ರಾಮದ ಓಬಳೇಶ್ ರವರ ಮಗ ನಿಧನ ಹೊಂದಿದ ಕಾರಣ ಮೃತರ ನಿವಾಸಕ್ಕೆ ಜೆಡಿಎಸ್ ಮುಖಂಡರಾದ ಎಂ. ರವೀಂದ್ರಪ್ಪ ನವರು ಹಾಗೂ ಜಿಲ್ಲಾಧ್ಯಕ್ಷರಾದ ಕೆ.ಮಂಜುನಾಥ್ ರವರು ಭೇಟಿ ನೀಡಿ, ಅಂತಿಮ ನಮನ ಸಲ್ಲಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಓಬಳೇಶ್ ರವರ ಕುಟುಂಬಸ್ಥರು, ಜೆಡಿಎಸ್ ಮುಖಂಡರುಗಳು ಹಾಗೂ ಪಕ್ಷದ ಕಾರ್ಯಕರ್ತರುಗಳು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗ್ರಾಮಸ್ಥರು ಹಾಗೂ ಅವರ ಬಂಧುಗಳು ಉಪಸ್ಥಿತರಿದ್ದರು.
