
ಹಿರಿಯೂರು:
ಆರೋಗ್ಯ ಸೇವೆಯನ್ನು ಧ್ಯೇಯವನ್ನಾಗಿ ಸ್ವೀಕರಿಸಿ ಬೆಂಗಳೂರಿನಲ್ಲಿ ಬಾಷ್ ಹೀಲ್ ಅಂಡ್ ಹೆಲ್ತ್ ಸೆಂಟರ್ (ಕೀಲು ಮೂಳೆ ಮತ್ತು ನರರೋಗಿಗಳ ಶಸ್ತ್ರ ಚಿಕಿತ್ಸೆಯ ನಂತರದ ಆರೈಕೆ ಕೇಂದ್ರವನ್ನು) ಸ್ಥಾಪಿಸಿ ಅದರ ನಿರ್ದೇಶಕಿಯಾಗಿ ಮುನ್ನೆಡಿಸಿಕೊಂಡು ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ನಲ್ಮೆಯ ತನುಜೀಯ ನಾಜ್ ಅವರಿಗೆ ಹಿರಿಯೂರು ತಾಲ್ಲೂಕು ಮಟ್ಟದ 7ನೇಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರಾದ ಎಂ.ಜಿ.ರಂಗಸ್ವಾಮಿ, ಜಿ.ಪ್ರೇಮ್ ಕುಮಾರ್, ಮಹಮ್ಮದ್ ಫ್ರಕೃದ್ಧೀನ್, ರಂಗಸ್ವಾಮಿಸಕ್ಕರ, ಮಾಲತೇಶ್ ಅರಸ್, ಚಮನ್ ಷರೀಫ್, ಸೂರ್ಯೋದಯನವೀದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
