June 1, 2026
0006 - Copy (2)

ಮೈಸೂರು:

ಮೈಸೂರಿನ ವನ್ಯಜೀವಿ ಛಾಯಾಗ್ರಾಹಕ  ಎಸ್.ತಿಪ್ಪೇಸ್ವಾಮಿ ಅವರ ಎರಡು ವನ್ಯಜೀವಿ ಛಾಯಾಚಿತ್ರಗಳು ಈ ವರ್ಷ ದಕ್ಷಿಣ ಆಫ್ರಿಕಾದಲ್ಲಿ  ನಡೆಯುವ ವಿಶ್ವಕಪ್  ಚಾಯಾಗ್ರಾಹಣ ಸ್ಪರ್ಧೆ ಆಯ್ಕೆಯಾಗಿವೆ. ಶ್ರೀಯುತ ಎಸ್.ತಿಪ್ಪೇಸ್ವಾಮಿ ಅವರು   ಹಿರಿಯೂರು  ತಾಲ್ಲೂಕು ಆಲೂರು ಗ್ರಾಮದ ಕೃಷಿಕ ಕುಟುಂಬದ  ಎಸ್. ಸಿದ್ದಣ್ಣನವರ ಮಗನಾಗಿದ್ದು, ಅಪ್ಪಟ ಗ್ರಾಮೀಣ ಪ್ರತಿಭೆಯಾಗಿದ್ದಾರೆ.

ಈ ಸ್ಪರ್ಧೆಯನ್ನು ಫೆಡರೇಷನ್  ಆಫ್ ಇಂಟರ್ ನ್ಯಾಷನಲ್ ಫೋಟೋಗ್ರಫಿ ಆರ್ಟ್ ನಡೆಸುತ್ತಿದ್ದು, ಈ ಸ್ಪರ್ಧೆಯ ಮಾನ್ಯತೆಯನ್ನು ಯುನೆಸ್ಕೋ ಸಂಸ್ಥೆಯು ನೀಡಿದ್ದು, ಭಾರತ ದೇಶದ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿಯು ಭಾರತದ 10ಜನ ವನ್ಯಜೀವಿ ಛಾಯಾಗ್ರಾಹಕರ 10ಪ್ರಿಂಟ್ ಗಳಷ್ಟು ಮತ್ತು 20ಡಿಜಿಟಲ್ ಚಿತ್ರಗಳನ್ನು ಆಯ್ಕೆ ಮಾಡಿ ಈ ಸ್ಪರ್ಧೆಗೆ ಕಳುಹಿಸಿಕೊಡಲಾಗುತ್ತದೆ.

ಪ್ರಪಂಚದ ನಾನಾ ದೇಶದ ವನ್ಯಜೀವಿ ಸಂಘ-ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಅತ್ಯುನ್ನತ  ಚಿತ್ರಗಳ ತಂಡಕ್ಕೆ ವಿಶ್ವಕಪ್ ನೀಡಲಾಗುತ್ತದೆ. ನಮ್ಮ ದೇಶ ಈಗಾಗಲೇ 5 ಬಾರಿ ವಿಶ್ವಕಪ್ ಗೆದ್ದುಕೊಂಡಿದೆ.

ನನ್ನ ವನ್ಯಜೀವಿ ಛಾಯಾಚಿತ್ರಗಳು ಈವರೆಗೂ 15 ಬಾರಿ ಆಯ್ಕೆಗೊಂಡಿದೆ.ಈಗ ಆಯ್ಕೆಯಾದ  ಚಿತ್ರಗಳು ಪ್ರಿಂಟ್ ವಿಭಾಗದಲ್ಲಿ ರಿವರ್ ಟರ್ಸ್ ಫೀಡಿಂಗ್ಚೆಕ್ ಮತ್ತು ಲೆಪರ್ಡ್ ವಿತ್ ಕಿಲ್ ಡಿಜಿಟಲ್ ವಿಭಾಗಕ್ಕೆ ಆಯ್ಕೆಯಾಗಿವೆ ಎಂಬುದಾಗಿ ಎಸ್.ತಿಪ್ಪೇಸ್ವಾಮಿ ಅವರು ಹೇಳಿದ್ದಾರೆ.

About The Author

Leave a Reply

Your email address will not be published. Required fields are marked *