
ಹಿರಿಯೂರು:
ಐಮಂಗಲ ವ್ಯಾಪ್ತಿಯಲ್ಲಿ ಮೊನ್ನೆ ನೆಡೆಸಿದ ಪೊಲೀಸ್ ಕಾರ್ಯಾಚರಣೆಯಲ್ಲಿ 2ಕೆ.ಜಿ.ಗಾಂಜಾ ಸ್ಕೂಟಿ ತೂಕದ ಯಂತ್ರವನ್ನು ವಶಕ್ಕೆ ಪಡೆದಿರುವ ಜೊತೆಗೆ ಈರಪ್ಪ, ಚೋರುಮುತ್ತಿ, ಗುಂಡ ಬಂಧನವಾಗಿದ್ದಾರೆ ಎಂಬುದಾಗಿ ಮಾಹಿತಿ ತಿಳಿದುಬಂದಿದೆ.

ನಂತರ ಮುಂದುವರೆದ ಪೊಲೀಸ್ ಕಾರ್ಯಾಚರಣೆಯಲ್ಲಿ ನಗರದ ಟ್ಯಾಂಕ್ ರಸ್ತೆಯ ನಿಂಗಣ್ಣ ಕ್ವಾಟ್ರಾಸ್ ವಾಸಿ ಮಂಜುಳ ಮನೆಯಲ್ಲಿ 18,400 ಮೌಲ್ಯದ 467ಗ್ರಾಂ ಒಣಗಾಂಜಾ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಮಿಂಚಿನ ಕಾರ್ಯಾಚರಣೆಯನ್ನು ನಡೆಸಿದ ಚಿತ್ರದುರ್ಗ ಜಿಲ್ಲಾ ರಕ್ಷಣಾ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

