April 23, 2026
0001

ಹಿರಿಯೂರು:

ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿದ್ದ ಜವಹರ್ ಲಾಲ್ ನೆಹರುರವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ, ಅವರ ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಬೇಕೆಂದು ಹೇಳಿದ್ದರಿಂದ ಪ್ರತಿವರ್ಷ ಅವರ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂಬುದಾಗಿ  ಗೋಪಾಲಪುರ 5ನೇ ಕೇಂದ್ರದ  ಅಂಗನವಾಡಿ ಕಾರ್ಯಕರ್ತೆ ಬಿ.ಪಿ.ನಿರ್ಮಲ ಹೇಳಿದರು.

ನಗರದ ಗೋಪಾಲಪುರದಲ್ಲಿರುವ ವಿವಿಧ ಅಂಗನವಾಡಿ ಕೇಂದ್ರಗಳ ವತಿಯಿಂದ ಜವಹರ್ ಲಾಲ್ ನೆಹರುರವರ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ  ಗೋಪಾಲಪುರ 5ನೇ ಕೇಂದ್ರದ  ಅಂಗನವಾಡಿ ಕಾರ್ಯಕರ್ತೆ ಬಿ.ಪಿ.ನಿರ್ಮಲ ಮತ್ತು 4ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಡಿ. ಪಲ್ಲವಿ ಅಂಗನವಾಡಿ ಸಹಾಯಕಿಯರಾದ ಕೆ.ಶೋಭಾ, ಅಂತೋಣಿ  ಸೇರಿದಂತೆ ವಾರ್ಡಿನ ಮಕ್ಕಳು, ಪೋಷಕರು, ಮಕ್ಕಳ ತಾಯಂದಿರು,  ಗರ್ಭಿಣಿಯರು,   ಬಾಣಂತಿಯರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *