March 6, 2026
0003

ಹಿರಿಯೂರು:

ಅಜ್ಞಾನ ಮತ್ತು ವಿಜ್ಞಾನಕ್ಕೂ  ಬಹಿರಂಗ ಅಂತರವಿದೆ. ಈ ಅಂತರವೇನೆಂದರೆ ಅಜ್ಞಾನ ತಪ್ಪುಗಳ ಮಹಾಕೂಟ. ವಿಜ್ಞಾನ ಎಂದರೆ ಸತ್ಯ. ಸರಿ-ತಪ್ಪುಗಳ ನಿಖರತೆಗೆ ಹಾಗೂ  ಸರಿಯಾದ ಪರೀಕ್ಷೆ  ಪರಿಶೋಧನೆಯ ಸತ್ಯಶೋಧ..    ಎಂಬುದಾಗಿ ಪರಮಪೂಜ್ಯ ಶ್ರೀ ಬಸವಹರಳಯ್ಯಸ್ವಾಮೀಜಿಯವರ ಹೇಳಿದರು.

ತಾಲ್ಲೂಕಿನ ಶಿವಶರಣ ಹರಳಯ್ಯ ಶಿಕ್ಷಣ ಸಂಸ್ಥೆಯಲ್ಲಿ  ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ  ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಸತ್ಯಶೋಧದ ಪರಮ ಸತ್ಯವೇ ವಿಜ್ಞಾನ.ಅಂದರೆ ಪರೀಕ್ಷೆಗೆ ಒಳಪಡುವುದೆಲ್ಲವೂ ವಿಜ್ಞಾನ, ಪರೀಕ್ಷೆಗೆ ಒಳಪಡದಿರುವುದೇ ಅಜ್ಞಾನ. ಅಗತ್ಯವೇ ವಿಜ್ಞಾನ.  ಅಗತ್ಯವೇ ಅಜ್ಞಾನ. ಸತ್ಯಶೋಧಕರೆಲ್ಲಾ  ವಿಜ್ಞಾನಿಗಳಾದರು ಅಸತ್ಯಶೋಧಕರೆಲ್ಲಾ ಅಜ್ಞಾನಿಗಳಾದರು. ಈ ಸತ್ಯಶೋಧನೆ ದಾರಿಯಲ್ಲಿ ಬಂದವರೆಲ್ಲ ವಿಜ್ಞಾನಿಯಾಗಿರುವರು ಎಂಬುದಾಗಿ ಅವರು ಹೇಳಿದರು.

ರಾಷ್ಟ್ರೀಯ ವಿಜ್ಞಾನದಿನದ  ಪ್ರಯುಕ್ತ ಇಂದು ನಾವೆಲ್ಲ ಸಂಶೋಧನೆಗಾಗಿ ಕಳೆದು ಹೊಸಹೊಸ ಅವಿಷ್ಕಾರ ಮಾಡಿ ಸಮಾಜದ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸಿದ  ಮಹನೀಯರ ಸವಿ ನೆನಪಿಗಾಗಿ ಸರ್ಕಾರ ರಾಷ್ಟ್ರೀಯ ದಿನ ಆಚರಿಸುವ  ಮೂಲಕ ಈ ಮಹನೀಯರಿಗೆ ಗೌರವ ಸಲ್ಲಿಸುವ ಈ ಸಂದರ್ಭದಲ್ಲಿ ಸರ್.ಸಿ.ವಿ.ರಾಮನ್ ಅವರನ್ನು ನೆನಪಿಸುತ್ತಾ ಈ ಕಾರ್ಯಕ್ರಮ ಯುವಕರ ಬಾಳಿಗೆ ಹೊಸಬೆಳಕನ್ನು ನೀಡಿ ಹೊಸ ಹೊಸ  ವಿಜ್ಞಾನಿಗಳನ್ನು ರೂಪಿಸಲಿ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ರಾಜಣ್ಣ ಮತ್ತು ರಕ್ಷತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *