ಪ್ರದೇಶದಲ್ಲಿಮುಸ್ಲಿಂಕಮಿಟಿ ಯಿಂದಪೈಗಂಬರ್ ಜನ್ಮದಿನದ
ಪ್ರಯುಕ್ತಸಾರ್ವಜನಿಕರಿಗೆ ಆಹಾರವಿತರಣೆಯ ಕಾರ್ಯಕ್ರಮ
ಹಿರಿಯೂರು ;
ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಇವರ ಜನ್ಮದಿನದ ಅಂಗವಾಗಿ ಸಮಸ್ತ ಮುಸ್ಲಿಂ ಕಮಿಟಿ ವತಿಯಿಂದ ಸಾರ್ವಜನಿಕರಿಗೆ ಆಹಾರ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಮುಸ್ಲಿಂ ಮುಖಂಡರಾದ ಸಲ್ಮಾನ್ ಸಹಾಫಿ ಅವರು ಹೇಳಿದರು.

ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ಮತ್ತಿತರೆ ಜನನಿಬಿಡ ಪ್ರದೇಶಗಳಲ್ಲಿ ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಇವರ ಜನ್ಮದಿನದ ಪ್ರಯುಕ್ತ ಸಾರ್ವಜನಿಕರಿಗೆ ಆಹಾರ ವಿತರಿಸಿ, ನಂತರ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸಲ್ಮಾನ್ ಸಹಾಫಿ, ಮೌಲಾನಾ ಮುಬಾರಕ್, ಅಲೀಮ್, ಬುರಾನ್ ರಜಾ, ಹುಸೇನ್, ಎಸ್.ಎನ್.ಪಿ. ಟಿ ಕಾರ್ಮಿಕರು, ಸೂರ್ಯೋದಯ ಅಬ್ದುಲ್ಅಜೀಜ್, ಅಬ್ದುಲ್ ಕರೀಂ, ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ವಿಜಯಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.


