March 5, 2026
2

ಹಿರಿಯೂರು:  

ಜಿಲ್ಲೆಯಲ್ಲಿನ ಮಾಜಿ ದೇವದಾಸಿ ಮಹಿಳೆಯರು  ಮತ್ತು ಅವರ ಕುಟುಂಬದವರ ಬಗ್ಗೆ  ಮಾಹಿತಿ ಗುರುತಿಸುವ ಮೂಲಕ ದೇವದಾಸಿಯರ  ಸಮೀಕ್ಷಾ ಪೆಟ್ಟಿಗೆ  ಸೇರಲು ವಿವಿಧ ಸಂಘಟನೆಗಳು  ಕಾರ್ಯಪ್ರವೃತ್ತರಾಗಬೇಕು ಎಂಬುದಾಗಿ ಡಾ.ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ  ಪರಿಷತ್ ಅಧ್ಯಕ್ಷರಾದ ಬಿ.ಪಿ.ತಿಪ್ಪೇಸ್ವಾಮಿ ಅವರು ಹೇಳಿದರು.

ರಾಜ್ಯದಲ್ಲಿ ಮಾಜಿ ದೇವದಾಸಿಯರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮ ಅನುಷ್ಠಾನಗೊಳಿಸಿಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ಕುರಿತಂತೆ  ನಿಖರ ಮಾಹಿತಿ  ಸಂಗ್ರಹಿಸಿ ಪುನರ್ವಸತಿ ಒದಗಿಸಲು ಸರ್ಕಾರ  ಆದೇಶಿಸಿದ್ದು 2024-25 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ  ಮಾಜಿ ದೇವದಾಸಿಯರ ಮರು ಸಮೀಕ್ಷೆ ನಡೆಸಲು  ಮಾರ್ಗಸೂಚಿಗಳು ಬಿಡುಗಡೆಗೊಳಿಸಿದ್ದು, ಸಮೀಕ್ಷೆಗೆ ಆಯ್ಕೆಯಾದ  14 ಜಿಲ್ಲೆಗಳಲ್ಲಿ ಚಿತ್ರದುರ್ಗವೂ ಒಂದಾಗಿದೆ.

ಆದ್ದರಿಂದ ಹಲವು ಕಾರಣಗಳಿಂದ ಸಮೀಕ್ಷೆಯಿಂದ ಹೊರಗುಳಿದ ಅವರನ್ನು ಪಟ್ಟಿಗೆ ಸೇರ್ಪಡೆ ಮಾಡುವುದರ ಮೂಲಕ ಅವರ ಹಾಗೂ ಅವರ ಕುಟುಂಬದ ಸದಸ್ಯರ ಶಿಕ್ಷಣ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಸುದಾರಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್  ನೇತೃತ್ವದಲ್ಲಿ ಮರು ಸಮೀಕ್ಷೆಗೆ ಸಮಿತಿ ರಚಿಸಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ‍್ದಿ ಇಲಾಖೆಯಲ್ಲಿ ಮಾಹಿತಿ ಲಭ್ಯಿರುತ್ತದೆ ಎಂಬುದಾಗಿ ಅವರು ಹೇಳಿದರು.

ಆದ್ದರಿಂದ ಜಿಲ್ಲೆಯ ಡಿ.ಎಸ್.ಎಸ್. ಬಣಗಳು, ಅಂಬೇಡ್ಕರ್ ಸಂಘಟನೆಗಳು ತಮ್ಮ ಗ್ರಾಮಗಳಲ್ಲಿರುವ ಮಾಜಿ ದೇವದಾಸಿ ಮಹಿಳೆ ಮತ್ತು ಅವರ ಕುಟುಂಬದವರಿಗೆ ಈ ಮಾಹಿತಿ ನೀಡಿ ಜಾಗೃತಗೊಳಿಸಿ, ನಾಗರೀಕ ಬದುಕಿನ ಮುಖ್ಯವಾಹಿನಿಗೆ  ತರುವಂತೆ ಅವರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *