March 3, 2026
00004

ಹಿರಿಯೂರು:

ಅಸಹಿಷ್ಣುತೆ ಮತ್ತು ದ್ವೇಷದ ರಾಜಕಾರಣವನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ.ಯಾವುದೇ ಬೆದರಿಕೆ ಅಥವಾ ದಮನವು ಸತ್ಯದ ಧ್ವನಿಯನ್ನು ಮೌನಗೊಳಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷವು ತನ್ನ ಧಾರ್ಮಿಕ ಸಹಿಷ್ಣುತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬದ್ಧತೆಯಿಂದ ಹಿಂದೆ ಸರಿಯುವುದಿಲ್ಲ ಎಂಬುದಾಗಿ  ಕಾಂಗ್ರೆಸ್ ಯುವ ಘಟಕದ  ಅಧ್ಯಕ್ಷರಾಧ ವಿ. ದರ್ಶನ್ ಅವರು ಹೇಳಿದರು.

ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಆರ್ ಎಸ್. ಎಸ್.  ಮುಖಂಡರೊಬ್ಬರು  ದೂರವಾಣಿ ಮೂಲಕ ನಿಂದನೆ ಮಾಡಿ ಬೆದರಿಕೆಒಡ್ಡಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್  ಕಾರ್ಯಕರ್ತರು ನಗರದ ಪ್ರಧಾನ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಗಾಂಧಿ ವೃತ್ತದಲ್ಲಿ ಆರ್.ಎಸ್.ಎಸ್. ಮುಖಂಡರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿ ಅವರು ಮಾತನಾಡಿದರು.

ಸಚಿವರಾದ ಪ್ರಿಯಾಂಕ ಖರ್ಗೆ  ಅವರಿಗೆ ಬೆದರಿಕೆ  ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದ್ದೇವೆ. ದ್ವೇಷ ರಾಜಕಾರಣದ ವಿರುದ್ಧ ಎಲ್ಲಾ ಪ್ರಜಾಪ್ರಭುತ್ವವಾದಿ ಶಕ್ತಿಗಳು ಒಗ್ಗೂಡಬೇಕು  ಎಂಬುದಾಗಿ ಅವರು ಹೇಳಿದರು.

ಈ ಪ್ರತಿಭಟನೆಯಲ್ಲಿ ಹಿರಿಯೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ,  ಜಿಲ್ಲಾಯುವ ಕಾಂಗ್ರೆಸ್ ಅಧ್ಯಕ್ಷರಾದ ಕಾರೇಹಳ್ಳಿ ಉಲ್ಲಾಸ್, ಹಿರಿಯೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಅಭಿಲಾಷ್ ಪಟೇಲ್,  ಗ್ರಾಮಾಂತರ ಯುವ ಕಾಂಗ್ರೆಸ್  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಅವಿನಾಶ್, ಮೊಹಮ್ಮದ್ ಶಾಹಿದ್, ರಘು, ವಿಜಯ್ ಕುಮಾರ್, ಅನಿಲ್, ಮಧು, ವಿನಯ್ , ಪ್ರಸಾದ್, ರಾಮಚಂದ್ರ, ರಾಘವೇಂದ್ರ, ಮುಜಾಮಿಲ್, ಭಾಗ್ಯಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *