October 6, 2025
07

ಹಿರಿಯೂರು:

ನಗರದ ನಗರಸಭೆಯ ಅವರ್ತಕ ನಿಧಿಯಡಿಯಲ್ಲಿ ನಗರಸಭೆ ಕಛೇರಿ ಮುಂಭಾಗ ಉದ್ಯಾನವನ, ನೀರಿನ ಕಾರಂಜಿ ಮತ್ತು ವಾಹನಗಳ ನಿಲುಗಡೆ ತಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ  ಸೆಪ್ಟಂಬರ್ 07 ರಂದು ಬೆಳಿಗ್ಗೆ 10.30ಕ್ಕೆ  ರಾಜ್ಯ ಯೋಜನಾ ಹಾಗೂ ಸಾಂಖ್ಯಿಕ ಇಲಾಖೆ ಸಚಿವರು  ಹಾಗೂ  ಜಿಲ್ಲಾ ಉಸ್ತುವಾರಿ  ಸಚಿವರಾದ ಡಿ. ಸುಧಾಕರ್ ರವರು  ಚಾಲನೆ ನೀಡಲಿದ್ದಾರೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ  ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆದ್ದರಿಂದ ಈ ವಿಶೇಷ ಕಾರ್ಯಕ್ರಮಕ್ಕೆ ಸಾರ್ವಜನಿಕರು, ನಗರದ ನಾಗರೀಕರು, ಎಲ್ಲಾ ಪತ್ರಕರ್ತರು, ಹಾಗೂ ಮಾಧ್ಯಮ ಮಿತ್ರರು ಅಗಮಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಈ ಮೂಲಕ  ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *