
ಹಿರಿಯೂರು:
ತಾಲ್ಲೂಕು ಒಕ್ಕಲಿಗರ ಸಂಘದ ಹಾಸ್ಟೆಲ್ ಮುಂಭಾಗ ಕೊರೆಸಿರುವ ಕೊಳವೆ ಬಾವಿಗೆ ಅಳವಡಿಸಲು ಮೋಟಾರ್ ಪಂಪ್ ಪೈಪ್ಸ್ ಹಾಗೂ ಸಂಬಂಧಿಸಿದ ಎಲ್ಲಾ ಬಿಡಿ ಭಾಗಗಳನ್ನು ತಮ್ಮ ಸ್ನೇಹಿತರಿಂದ ಉಚಿತವಾಗಿ ತುರ್ತಾಗಿ ಕೊಡಿಸಿಕೊಡಲು ನಮ್ಮ ಸಂಘದ ಅಧ್ಯಕ್ಷರಿಗೆ ಭರವಸೆ ನೀಡಿದ್ದಾರೆ.
ಆದ್ದರಿಂದ ಗ್ರೇಟರ್ ಬೆಂಗಳೂರು ಉಪಆಯುಕ್ತರು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದಂತಹ ಶ್ರೀಯುತ ಜೆ.ರಾಜುರವರಿಗೆ ತಾಲ್ಲೂಕು ಸಂಘದ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

