
ಹಿರಿಯೂರು :
ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಾಂಕಿಕ ಇಲಾಖೆ.ಸಚಿವರಾದ ಡಿ.ಸುಧಾಕರ್ ರವರು ಶೀಘ್ರವಾಗಿ ಗುಣಮುಖರಾಗಿ ಬರಲೆಂದು ವೇದಾವತಿ ನಗರದಲ್ಲಿರುವ ವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ವೈ.ನಾಗರಾಜ್ ಮಸ್ಕಲ್. ಬಬ್ಬೂರ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಿ.ಅರುಣ್ ಕುಮಾರ್, ಹೊಸಹಟ್ಟಿ ಚಿತ್ತಪ್ಪಟಿ.ಬಿ.ಸರ್ಕಲ್, ಗ್ಯಾರಂಟಿ ಯೋಜನೆ ಪ್ರಾಧಿಕಾರ ಸದಸ್ಯರಾದ ಪಿ.ಕೃಷ್ಣಮೂರ್ತಿ, ತಿಪ್ಪನಾಯಕಆದಿರಾಳು, ಬಬ್ಬೂರು ಗಿರೀಶ್, ಆಟೋನಾಯಕ ಸಮುದಾಯದ ಮುಖಂಡರಾದ ಲಕ್ಷ್ಮಣ್ ಹಾಗೂ ಒಂದೇ ಮಾತರಂ ಜಾಗೃತಿ ವೇದಿಕೆಯ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
