
ಹಿರಿಯೂರು :
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಶಿವಮೊಗ್ಗದ ವಕೀಲರಾದ ಶ್ರೀಮತಿ ಕೆ.ಎನ್.ವೀಣಾ ಇವರು ಹಿರಿಯೂರಿಗೆ ಬಂದು ಕೋರ್ಟ್ ಆವರಣದಲ್ಲಿ ವಕೀಲರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯೂರು ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರಾದ ಎಂ.ರವೀಂದ್ರನಾಥ್ ಚಂದ್ರಕೀರ್ತಿ ಗುಜ್ಜಾರ್, ಇತರರು ಉಪಸ್ಥಿತರಿದ್ದು, ಕೆ.ಎನ್. ವೀಣಾ ಅವರಿಗೆ ಅಭಿನಂದಿಸಿದರು.

