
ಹಿರಿಯೂರು:
ತಾಲ್ಲೂಕಿನ ಕಾತ್ರಿಕೇನಹಳ್ಳಿ ಗ್ರಾಮದ ಎಸ್.ಸಿ.ಜನಾಂಗದ ವೀರೇಶ್ ಎಂಬುವರಿಗೆ ಸೇರಿದ ಮನೆಯು ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಮನೆಯು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ಕೂಲಿ ಕೆಲಸ ಮಾಡಿಕೊಂಡು ತನ್ನ ಗುಡಿಸಲಿನಲ್ಲಿ ಕೂಡಿಟ್ಟಿದ್ದ ಧನ ದಾನ್ಯ ವಡವೆ ವಸ್ತ್ರಮತ್ತಿತರ ದಿನನಿತ್ಯ ಬಳಸುವ ವಸ್ತುಗಳು ಬೆಂಕಿಗಾಹುತಿಯಾಗಿರುವದರಿಂದ ಆ ಬಡ ಕುಟುಂಬವು ಬೀದಿಗೆ ಬಿದ್ದಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಉಡುವಳ್ಳಿ ಪಂಚಾಯಿತಿ ಅಧ್ಯಕ್ಷರಾದ ಈ.ಶ್ರೀನಿವಾಸ ರವರು ಮನೆ ಕಳೆದುಕೊಂಡವರಿಗೆ ಧೈರ್ಯ ಹೇಳಿ 5ಸಾವಿರ ರೂಗಳ ವೈಯಕ್ತಿಕ ಪರಿಹಾರ ಧನವನ್ನು ವಿತರಿಸಿದರು.

