March 2, 2026
1

ಹಿರಿಯೂರು:   

ಪ್ರಧಾನಿ ನರೇಂದ್ರಮೋದಿ ಅವರ ಮನ್ ಕೀ ಬಾತ್ ವೀಕ್ಷಣೆಯಲ್ಲಿ ಮೊದಲ ಸ್ಥಾನ ಪಡೆಯುವಲ್ಲಿ ಸ್ಥಳೀಯ ಕಾರ್ಯಕರ್ತರ  ಶ್ರಮಅಪಾರವಾಗಿದೆ, ರಾಜ್ಯಕ್ಕೆ ನಂ.1 ಸ್ಥಾನ ಪಡೆದಿರುವುದು ಪಕ್ಷ ಸಂಘಟನೆಗೆ ಹೊಸ ಚೈತನ್ಯ ತಂದಿದೆ ಎಂಬುದಾಗಿ ಬಿಜೆಪಿ ಮಂಡಲ ಅಧ್ಯಕ್ಷ ಕೆ.ಅಭಿನಂದನ್ ಸಂತಸ ವ್ಯಕ್ತಪಡಿಸಿದ್ದಾರೆ.

ಬಿ.ಜೆ.ಪಿ. ತಾಲ್ಲೂಕು ಘಟಕ ಪ್ರಧಾನಿ ನರೇಂದ್ರಮೋದಿ ಅವರ  ಮನ್  ಕಿ ಬಾತ್ ಕಾರ್ಯಕ್ರಮ ವೀಕ್ಷಣೆಯಲ್ಲಿ ರಾಜ್ಯಕ್ಕೆ ನಂ.1 ಸ್ಥಾನ ಪಡೆದಿದೆ. ಬಿ.ಜೆ.ಪಿ.ಶಿಸ್ತು, ಸಂಘಟನೆಗೆ ಆದ್ಯತೆ ನೀಡಿದ್ದು, ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 2018ರಲ್ಲಿ  ಬಿ.ಜೆ.ಪಿ. ಗೆಲುವು ಸಾಧಿಸಿತ್ತು. 2023ರ ಚುನಾವಣೆಯಲ್ಲಿ 2ನೇ ಸ್ಥಾನ ಪಡೆಯಿತು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ-ಜೆ.ಡಿ.ಎಸ್ ಮೈತ್ರಿ ಮೇಲುಗೈ ಸಾಧಿಸಿರುವುದು  ಕಾರ್ಯಕರ್ತರಲ್ಲಿ  ಉತ್ಸಾಹ ತುಂಬಿದೆ. ಯುವಮುಖಂಡರಾದ ಕೆ.ಅಭಿನಂದನ್ ಬಿ.ಜೆ.ಪಿ. ಮಂಡಲ ಅಧ್ಯಕ್ಷರಾಗಿ  ನೇಮಕವಾದ ನಂತರ   ಪಕ್ಷ ಸಂಘಟನೆಯಲ್ಲಿ  ಮುಂಚೂಣಿಯಲ್ಲಿರುವುದು ವರಿಷ್ಠರ ಮೆಚ್ಚುಗೆಗೆ ಪಾತ್ರವಾಗಿದೆ.

About The Author

Leave a Reply

Your email address will not be published. Required fields are marked *