
ಹಿರಿಯೂರು :
ಮಹಾಯೋಗಿ ವೇಮನರು ಸುಮಾರು 15ನೇಯ ಶತಮಾನದಲ್ಲಿ ಆಂಧ್ರಪ್ರದೇಶದ ತೆಲುಗಿನ ಶ್ರೇಷ್ಠ ವಚನಕಾರರಾಗಿದ್ದು, ಇವರ ಜಯಂತಿಯನ್ನು ಪ್ರತಿವರ್ಷ ಜನವರಿ 19ರಂದು ಆಚರಿಸಲಾಗುತ್ತದೆ, ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ವೇಮನರು ತೆಲುಗು ಭಾಷೆಯ ಮಹಾನ್ ತತ್ವಜ್ಞಾನಿ ಹಾಗೂ ಕವಿಗಳಾಗಿದ್ದಾರೆ ಎಂಬುದಾಗಿ ನಿವೃತ್ತ ಉಪನ್ಯಾಸಕರಾದ ಟಿ.ಶಿವಪ್ರಸಾದ್ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಮಹಾಯೋಗಿ ವೇಮನ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಾಯೋಗಿ ವೇಮನರ ವಚನಗಳು ಸಾಮಾಜಿಕ ಅನಿಷ್ಠಗಳನ್ನು ಖಂಡಿಸುವ ಜೊತೆಗೆ ಆತ್ಮಜ್ಞಾನದ ಮಹತ್ವವನ್ನು ಒತ್ತಿಹೇಳುತ್ತವೆ, ಅವರು ತಮ್ಮ ವಚನಗಳ ಮೂಲಕ ಸರಳ, ನೈತಿಕ ಉಪದೇಶಗಳಿಗಾಗಿ ಪ್ರಸಿದ್ಧರಾಗಿದ್ದಾರೆ, ಕವಿಗಳು, ಸಮಾಜ ಚಿಂತಕರು ಆದ ವೇಮನರು ಮನುಕುಲದ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ವೇಮನ ಸಮಾಜದ ವತಿಯಿಂದ ನಗರಸಭೆಯ ಡಿ ಗ್ರೂಪ್ ನೌಕರರಾದ ಸಿ.ಶಿವಣ್ಣ, ಹೆಚ್.ನಾಗರಾಜ್ ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪತಹಶೀಲ್ದಾರರಾದ ಕೆ.ಬಿ.ತಿಪ್ಪೇಸ್ವಾಮಿ ವಹಿಸಿದ್ದರು. ನಿವೃತ್ತ ಉಪನ್ಯಾಸಕರಾದ ಟಿ.ಶಿವಪ್ರಸಾದ್, ಸಾಗರ್ ರೆಡ್ಡಿ ಹೋಟೆಲ್ ಮಾಲೀಕರಾದ ಸೀತಾರಾಮರೆಡ್ಡಿ, ಪ್ರಥಮ ದರ್ಜೆ ಗುತ್ತಿಗೆದಾರರಾದ ನಾರಾಯಣರೆಡ್ಡಿ, ಚಿತ್ರದುರ್ಗದ ಮಾಜಿ ಶಾಸಕರಾದ ತಿಪ್ಪಾರೆಡ್ಡಿ ಮೊಮ್ಮಗ ಸಂದೀಪ ಗುಂಡಾರ್ಪಿ, ನಿವೃತ್ತ ಪೊಲೀಸ್ ಅಧಿಕಾರಿಗಳಾದ ರಾಮಕೃಷ್ಣರೆಡ್ಡಿ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಅನಿಲ್ ರೆಡ್ಡಿ, ಹೂವಿರ ವ್ಯಾಪಾರಿಗಳಾದ ಪ್ರಸನ್ನ, ಯುವಮುಖಂಡರಾದ ಪುನೀತ್ ತಾಳವಟ್ಟಿ, ಮೇಟಿಕುರ್ಕೆ ಗಿರೀಶ್, ಮಾಜಿಸೈನಿಕರು ಹಾಗೂ ಮಾಜಿಪೊಲೀಸ್ ಅಧಿಕಾರಿಗಳಾದ ವಾಸುದೇವರೆಡ್ಡಿ, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿಗಳಾದ ರವೀಂದ್ರನಾಥ್, ಪಶು ಸಂಗೋಪನಾಧಿಕಾರಿಗಳಾದ ಸುರೇಶ್ ರೆಡ್ಡಿ, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಗಿರೀಶ್, ವ್ಯವಹಾರಸ್ಥರಾದ ವಿಜಯೇಂದ್ರರೆಡ್ಡಿ, ನಿವೃತ್ತ ಪೊಲೀಸ್ ಅಧಿಕಾರಿಗಳಾದ ಸತ್ಯನಾರಾಯಣರೆಡ್ಡಿ ಪ್ರಭಾಕರ್ ರೆಡ್ಡಿ, ಶ್ರೀಮತಿ ಉಷಾಗಿರೀಶ್ ರೆಡ್ಡಿ, ಪಶುಸಂಗೋಪನ ಇಲಾಖೆ ಜಾನುವಾರು ಅಭಿವೃದ್ಧಿ ಅಧಿಕಾರಿ ಎಸ್.ಸುರೇಶ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿಗಮ ಚಂದ್ರಶೇಖರ್, ಪೋಲಿಸ್ ಇಲಾಖೆ ಪಿ.ಎಸ್.ಐ ಶ್ರೀಮತಿ ಶಶಿಕಲಾ, ಅರಣ್ಯ ಇಲಾಖೆ ಅಂಜಿನಪ್ಪ, ಕಾರ್ಮಿಕ ಇಲಾಖೆ ಜೋಗೇಶ್, ತಿಮ್ಮಾರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದಿನೇಶ್, ಆನಂದ್, ವಿ.ರಾಧಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

