March 2, 2026
0003 - Copy (2)

ಹಿರಿಯೂರು:

ನಗರದ ಶ್ರೀ ಬನಶಂಕರಿ ಕಲ್ಯಾಣ  ಮಂಟದಲ್ಲಿ  ಹೆಣ್ಣು ಮಕ್ಕಳಿಗೆ ಉಚಿತವಾಗಿ ಗುಡಿಕೈಗಾರಿಕಾ ತರಬೇತಿಯನ್ನು  ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ತರಬೇತುದಾರರು ಮಣಿಹಾರ ಹಾಗೂ ಹಪ್ಪಳ ಹೂವಿನ ಹಾರ ಗೊಂಬೆ ಇನ್ನು ಅನೇಕ ಗುಡಿಕೈಗಾರಿಕೆಗಳ ಬಗ್ಗೆ ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ರಾಜ್ಯ  ಮಹಿಳಾ ಅಧ್ಯಕ್ಷರಾದ ಶ್ರೀಮತಿ ಜಿ.ಎಸ್.ಪುಷ್ಪಲತ ಅವರು ವಹಿಸಿದ್ದರು. ಮುಖ್ಯ  ಅತಿಥಿಗಳಾಗಿ  ನಗರಸಭೆಯ ಮಾಜಿ ಸದಸ್ಯರಾದ  ಶ್ರೀಮತಿ ಸೈದಾಫಿರ್ದೋಸ್ , ಮುಖಂಡರುಗಳಾದ  ಪಿ.ಎಸ್.ಸಾದತ್ ಉಲ್ಲಾ, ಸುರ್ಯೋದಯಅಜೀಜ್, ವೇದಿಕೆಯ ಪದಾಧಿಕಾರಿಗಳಾದ  ಗೋಪಿ, ಪಾರ್ವತಮ್ಮ, ಉಷಾ, ನೇತ್ರಾವತಿ, ತಿಪ್ಪಮ್ಮ, ಸುಭದ್ರ  ಸೇರಿದಂತೆ ನೂರಕ್ಕೂ ಹೆಚ್ಚು ಮಹಿಳೆಯರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *