
ಹಿರಿಯೂರು:
ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯದ ನಾಲೆಗಳಿಗೆ ಈ ಕೂಡಲೇ ನೀರು ಹರಿಸುವ ಮೂಲಕ ತಾಲ್ಲೂಕಿನ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬುದಾಗಿ ಹೊಸಯಳನಾಡು ಗ್ರಾಮದ ಎಂ.ವಿಶ್ವನಾಥ್ ಹೇಳಿದರು.
ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯದ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಉಪತಹಶೀಲ್ದಾರ್ ರವರಿಗೆ ಮನವಿಪತ್ರ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಹೊಸಯಳನಾಡು ಗ್ರಾಮದ ಎಂ.ವಿಶ್ವನಾಥ್, ಎಂ.ಮಹೇಶ್, ಜಗದೀಶ್, ಪ್ರವೀಣ್, ಹೆಚ್.ಎಂ.ರಹಮಾನ್, ಗಂಗಾಧರ, ಹೆಚ್.ಲೋಕೇಶ್, ಬಿ.ಎಸ್.ಮಂಜುನಾಥ್, ಆರ್.ಮಣಿಕಂಠ, ಗಿರೀಶ್, ಎಸ್.ಟಿ.ಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

