
ಹಿರಿಯೂರು :
ಕರ್ನಾಟಕ ರಾಜ್ಯ ದಲಿತರ ದೌರ್ಜನ್ಯ ತಡೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಾಜ್ಯಮಟ್ಟದಲ್ಲಿ ನೂತನವಾಗಿ ರಚನೆಯಾಗಿದ್ದು, ಈ ಸಮಿತಿಯ ರಾಜ್ಯ ಅಧ್ಯಕ್ಷರಾಗಿ ದಲಿತರಾದ ಶ್ರೀಯುತ ಎಚ್.ಎನ್.ಕೇಶವಮೂರ್ತಿ ಹಾಗೂ ಗೌರವಾಧ್ಯಕ್ಷರಾಗಿ ಶ್ರೀಯುತ ಮಾನ್ಯ ಶ್ರೀಕಾಶ್ಯಾಮಯ್ಯನವರು ಸರ್ವ ಸದಸ್ಯರ ಬೆಂಬಲದಿಂದ ಆಯ್ಕೆಯಾಗಿರುತ್ತಾರೆ.
ರಾಜ್ಯ ಮಟ್ಟದ ದಲಿತ ದೌರ್ಜನ ತಡೆ ಮತ್ತು ಭ್ರಷ್ಟಾಚಾರ ನಿರ್ಮೂಲನ ಸಮಿತಿಯ ಉಳಿದ ಪದಾಧಿಕಾರಿಗಳನ್ನು 2026ರ ಜನವರಿ 5ರಂದು ಆಯ್ಕೆ ಮಾಡಲಾಗುತ್ತದೆ ಎಂಬುದಾಗಿ ರಾಜ್ಯ ದಲಿತರ ದೌರ್ಜನ್ಯ ತಡೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ನೂತನ ಅಧ್ಯಕ್ಷರಾದ ಶ್ರೀಯುತ ಎಚ್.ಎನ್. ಕೇಶವಮೂರ್ತಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

