
ಹಿರಿಯೂರು:
ಆರ್.ಎಸ್. ಎಸ್. ಶತಾಬ್ದಿ ವರ್ಷಚಾರಣೆ ಅಂಗವಾಗಿ ಸಂಘವನ್ನು ಮನೆ ಮನೆಗೆ ಇನ್ನೂ ಹೆಚ್ಚು ಪರಿಚಯಿಸುವ ಉದ್ದೇಶದಿಂದ ಗೃಹ ಸಂಪರ್ಕ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದರ ಭಾಗವಾಗಿ ಹಿರಿಯೂರು ನಗರದ 1ನೇ ವಾರ್ಡ್ ನಲ್ಲಿ ಇಂದು ಮನೆ ಮನೆ ಸಂಪರ್ಕ ಅಭಿಯಾನವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಮಾಜದ ಮುಖಂಡರು , ಗಣ್ಯರು ಹಾಗೂ ಸಂಘಟನೆಯ ಪ್ರಮುಖರ ಮನೆಗಳಿಗೆ ಭೇಟಿ ನೀಡಲಾಯಿತು.

