
ಹಿರಿಯೂರು :
ತಾಲ್ಲೂಕಿನ ಮಾಯಸಂದ್ರ ಶ್ರೀ ಕರಿಯಮ್ಮ ದೇವಿಯ ಕಡೇ ಕಾರ್ತಿಕೋತ್ಸವ ಹಾಗೂ ದೀಪೋತ್ಸವ ಪೂಜಾ ಮಹೋತ್ಸವವನ್ನು ಶ್ರೀಕರಿಯಮ್ಮದೇವಿಯ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತು ಗೌಡ್ರು, ಪೂಜಾರಿಗಳು, ಕೈವಾಡಸ್ಥರು ಇವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 5ರ ಶುಕ್ರವಾರ ರಾತ್ರಿ 9 ಗಂಟೆಗೆ ನಡೆಸಲಾಗುವುದು ಎಂಬುದಾಗಿ ದೇವಸ್ಥಾನ ಆಡಳಿತ ಮಂಡಳಿಯು ಮಾಧ್ಯಮಗಳಿಗೆ ತಿಳಿಸಿದೆ.
ಕಪಿಯಜ್ಜನವರ ಹನುಮಂತಪ್ಪ ಮತ್ತು ಮಕ್ಕಳು, ಹರಿಯಬ್ಬೆ ಪಾಳ್ಯ, ಶ್ರೀಮತಿ ತಿಮ್ಮಕ್ಕ, ಶ್ರೀ ಕುರುಬರಹಳ್ಳಿ ಉಗ್ರಪ್ಪ ಮತ್ತು ಮಕ್ಕಳು, ಶ್ರೀಮತಿ ನೇತ್ರಾವತಿ ಡಾ: ರಂಗರಾಜ್.ಎಲ್.ಮತ್ತು ಮಕ್ಕಳು, ನಂಜಯ್ಯನಕೊಟ್ಟಿಗೆ ಇವರುಗಳು ಅನ್ನದಾಸೋಹಿಗಳಾಗಿದ್ದಾರೆ ಎಂಬುದಾಗಿ ಅವರು ತಿಳಿಸಿದ್ದಾರೆ.
ಭಕ್ತಾದಿಗಳ ಸಹಕಾರದಿಂದ ತಾಯಿ ಕರಿಯಮ್ಮ ದೇವಿ ಹಾಗೂ ದೇವಸ್ಥಾನವನ್ನು ಹೂವಿನ ಅಲಂಕಾರದಿಂದ ಶೃಂಗಾರಗೊಳಿಸಲಾಗುವುದು. ಇದನ್ನು ಕಣ್ಣುತುಂಬಿಕೊಳ್ಳಲು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.
ಪ್ರತಿ ಶುಕ್ರವಾರ ರಾತ್ರಿ ಕರಿಯಮ್ಮದೇವಿ ದೇವಸ್ಥಾನದಲ್ಲಿ ಅನ್ನದಾಸೋಹವಿರುತ್ತದೆ. ಶ್ರೀ ಕರಿಯಮ್ಮ ದೇವಿಯ ಅನ್ನದಾಸೋಹಕ್ಕಾಗಿ ನಿರ್ಮಾಣವಾಗುತ್ತಿರುವ ಅಡುಗೆ ಕೋಣೆಯ ಕಟ್ಟಡನಿರ್ಮಾಣ ಹಂತದಲ್ಲಿ ಇರುವುದರಿಂದ ಭಕ್ತಾದಿಗಳು ತಮ್ಮ ಕೈಲಾದ ಸಹಾಯ ಮಾಡಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9743335157, 9019650054 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.
