March 2, 2026
00001

ಹಿರಿಯೂರು:

ಬಡರೋಗಿಗಳ ದೌರ್ಭಗ್ಯವೋ, ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯವೋ ಗೊತ್ತಿಲ್ಲ. ಆದರೆ ಹೆರಿಗೆ ವಾರ್ಡ್ ಮೇಲ್ಚಾವಣಿ ಕುಸಿದು ದೊಡ್ಡಅನಾಹುತ ತಪ್ಪಿದೆ. ತಾಲ್ಲೂಕು ಕೇಂದ್ರದ  ಸರ್ಕಾರಿ ಆಸ್ಪತ್ರೆ ಶಿಥಿಲಾವಸ್ಥೆಯಲ್ಲಿದ್ದು ಮೇಲ್ಚಾವಣಿ ಕುಸಿದು ರೋಗಿಗಳ ಮೇಲೆ ಬಿದ್ದು ಭುಜ ಸೇರಿದಂತೆ ಸಣ್ಣಪುಟ್ಟ ಗಾಯಗಳಾಗಿವೆ.

ಸರ್ಕಾರಿ ಆಸ್ಪತ್ರೆ ಮೇಲ್ಚಾವಣಿ ಶಿಥಿಲಗೊಂಡು  ಬೀಳುವ  ಪರಿಸ್ಥಿತಿಯಲ್ಲಿದ್ದರೂ ಅಂತಹ ವಾರ್ಡ್ ಗಳಲ್ಲೇ  ರೋಗಿಗಳನ್ನು ದಾಖಲು ಮಾಡಿಕೊಳ್ಳುವ ಮೂಲಕ ಸಮಸ್ಯೆಯನ್ನು ವಾರ್ಡ್ ಗಳಿಗೆ ರೋಗಿಗಳಿಗೆ ಶಿಫ್ಟ್ ಮಾಡುವ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ.

ಸಾರ್ವಜನಿಕ ಆಸ್ಪತ್ರೆಯ ಸಂಬಂಧಪಟ್ಟಅಧಿಕಾರಿಗಳು ಅಂತಹ ಸಮಸ್ಯೆಗಳನ್ನು ಗಮನಿಸದೇ ಇರುವುದು ನೋವಿನ ಸಂಗತಿ. ಈಗಲಾದರೂ ಎಚ್ಚೆತ್ತುಕೊಂಡು ಮುಂದಾಗುವಅನಾಹುತಗಳನ್ನು ತಪ್ಪಿಸಬೇಕು ಎಂದು ರೋಗಿಗಳ ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್  ಸೇರಿದಂತೆ ಯಾವುದೇ ಕೊಠಡಿ ಶಿಥಿಲಗೊಂಡಿದ್ದರೆ ಕೂಡಲೇ ದುರಸ್ತಿ  ಮಾಡಲು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಸುಧಾಕರ್ ಅವರು ಇತ್ತೀಚೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಅಧಿಕಾರಿಗಳು ಲೋಪ ಎಸಗಿದ್ದಾರೆ ಎನ್ನಲಾಗಿದೆ.

About The Author

Leave a Reply

Your email address will not be published. Required fields are marked *