March 6, 2026
00001

ಹಿರಿಯೂರು:

ಚಿತ್ರದುರ್ಗದ ಪಿ.ವಿ.ಎಸ್. ಆಸ್ಪತ್ರೆಯಲ್ಲಿ ಶೌಚಾಲಯ ಸ್ವಚ್ಚಗೊಳಿಸುವ  ಕೆಲಸ ಮಾಡುತ್ತಿದ್ದ ಅಂಜಿನಮ್ಮ ಎಂಬ ದಲಿತ ಮಹಿಳೆ ಮೇಲೆ  ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವ  ಆಸ್ಪತ್ರೆಯ ವೈದ್ಯರ  ಕಾರು ಚಾಲಕನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂಬುದಾಗಿ ಒತ್ತಾಯಿಸಿ ಗುರುವಾರ ದಲಿತ ಸಂಘಟನೆಗಳ ನೇತೃತ್ವದಲ್ಲಿ ತಹಶೀಲ್ದಾರ್ ರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯಗಳನ್ನು ತಪ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ದಲಿತರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ  ನೀಡುವ ದೂರುಗಳಿಗೆ  ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಜಾತಿ ನಿಂದನೆ ಬದಲು ಠಾಣೆಯಲ್ಲಿಯೇ ಜಾಮೀನು ನೀಡಬಹುದಾದ ಪ್ರಕರಣ ದಾಖಲು ಮಾಡಲಾಗುತ್ತಿದೆ.

ಪಿ.ವಿ.ಎಸ್.ಆಸ್ಪತ್ರೆಯಲ್ಲಿ ನಡೆದಿರುವ ಘಟನೆಯ ಬಗ್ಗೆ  ಜಿಲ್ಲಾಧಿಕಾರಿ ಹಾಗೂ ಪೊಲೀಸ ವರಿಷ್ಠಾಧಿಕಾರಿ  ಪರಿಶೀಲಿಸಿ  ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಒಕ್ಕೂಟದ  ಪದಾಧಿಕಾರಿಗಳು ಆಗ್ರಹಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಕೆ.ತಿಮ್ಮರಾಜು, ಘಾಟ್  ರವಿ, ಕೆ.ರಾಮಚಂದ್ರ, ಕೊಟ್ಟಿಗೆರಾಜಣ್ಣ, ಮಂಜುನಾಥ್ ಘಾಟ್, ಚಿದಾನಂದ್  ಉಡುವಳ್ಳಿ,  ರಂಗನಾಥ, ಕಣುಮೇಶ್, ಮೋಹನ್ ಕುಮಾರ್,  ಓಂಕಾರ್ ಮೂರ್ತಿ, ಕೆಂಚಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *